Wednesday, October 9, 2013

ಎಂಥ ಬಲವಂತನೋ ಕುಂತಿಯ ಸುಜಾತನೋ

ರಾಗ : ಪೀಲು
ತಾಳ : ಆದಿತಾಳ
ಪುರಂದರದಾಸರ ಕೃತಿ

ಎಂಥ ಬಲವಂತನೋ ಕುಂತಿಯ ಸುಜಾತನೋ | |
ಭಾರತೀಗೆ ಕಾಂತನೋ ನಿತ್ಯ ಶ್ರೀಮಂತನೋ | ಅ ಪ |

ರಾಮಚಂದ್ರನ ಪ್ರಾಣನೋ ಅಸುರ ಹೃದಯ ಬಾಣನೋ
ಖಳರ ಗಂಟಲ ಗಾಣನೋ ಜಗದೊಳಗೆ ಪ್ರವೀಣನೋ | |

ಕುಂತಿಯ ಕಂದನೋ ಸೌಗಂಧಿಕವ ತಂದನೋ
ಕುರುಕ್ಷೇತ್ರಕೆ ಬಂದನೋ ಕೌರವರ ಕೊಂದನೋ | |

ಬಂಡಿ ಅನ್ನವನುಂಡನೋ ಬಕನ ಪ್ರಾಣವ ಕೊಂದನೋ
ಭೀಮ ಪ್ರಚಂಡನೋ ದ್ರೌಪದಿಗೆ ಗಂಡನೋ | |

ವೈಷ್ಣವಾಗ್ರಗಣ್ಯನೋ ಸಂಚಿತಾಗ್ರ ಪುಣ್ಯನೋ
ದೇವವರೇಣ್ಯನೋ ದೇವಶರಣ್ಯನೋ | |

ಮಧ್ವಶಾಸ್ತ್ರವ ರಚಿಸಿದನೊ ಸದ್ವೈಷ್ಣವರ ಸಲಹಿದನೋ
ಉಡುಪಿ ಕೃಷ್ಣನ ನಿಲಿಸಿದನೋ ಪುರಂದರವಿಠಲನ ಒಲಿಸಿದನೆ | |  

No comments:

Post a Comment