Thursday, March 24, 2016

ಶ್ರೀ ವಾದಿರಾಜರು

ಇದೇ ಮಾರ್ಚ್ ೨೬ರಂದು ಶ್ರೀ ವಾದಿರಾಜ ತೀರ್ಥರ ಆರಾಧನ ಮಹೋತ್ಸವ

ಶ್ರೀ ವಾದಿರಾಜ ಸ್ವಾಮಿ,
ಜನನ: ೧೪೮೦ AD
ಪೂರ್ವಾಶ್ರಮ ಹೆಸರು : ಭೂ ವರಾಹ
ಜನ್ಮಸ್ತಳ :ಕುಂಭಾಶಿ ಉಡುಪಿ.
ಸನ್ಯಾಸ : ೮ನೆಯ ವರ್ಷದಲ್ಲಿ.
ಸನ್ಯಾಸದ ಹೆಸರು :ವಾದಿರಾಜ ತೀರ್ಥ
ಇತರ ಹೆಸರುಗಳು :ರಾಜರು,ಭಾವಿ ಸಮೀರ
ಗುರುಗಳು;ಶ್ರೀ ವಾಗೀಶ ತೀರ್ಥ.
ಶಿಷ್ಯರು; ವೇದ ವೇದ್ಯ ತೀರ್ಥ,ವೇದ ನಿಧಿ ತೀರ್ಥ,ಇನ್ನೂ ಹಲವರು.
ಸಿದ್ದಾಂತ ;ಮಧ್ವಾಚಾರ್ಯರು ಪ್ರತಿಪಾದಿಸಿದ ತತ್ವವಾದ
ಬರಹಗಳು;ಹತ್ತು ಹಲವು.
ಮುಖ್ಯ ಬರಹಗಳು;ರುಕ್ಮಿನೀಶವಿಜಯ ,ಯುಕ್ತಿ ಮಲ್ಲಿಕಾ ,ವೈಕುಂಠ ವರ್ಣನೆ .
ಮಠ; ಸೋದೆ ಮಠ.(ಕುಂಭಾಸಿ ಮಠ)
ಪರ್ಯಾಯ; ೫ ಸಲ
ಅವತಾರ;ಲಾತವ್ಯ.
ಬೃಂದಾವನ ಪ್ರವೇಶ : ೧೬೦೦ ನೆಯ ಇಸವಿಯಲ್ಲಿ ಅವರ ೧೨೦ ನೆಯ ವರುಷದಲ್ಲಿ.

ಶ್ರೀವಾದಿರಾಜರು ನೂರಿಪ್ಪತ್ತು ವರ್ಷಗಳ (120) ಕಾಲ ಜೀವಿಸಿದ್ದರು. ಅವರು ಮಾಡಿದ ಉದಾತ್ತ ಕಾರ್ಯಗಳಿಗೆ ಲೆಕ್ಕವಿಲ್ಲ. ಅವರು ಎಷ್ಟೋ ಜನರಿಗೆ ಉಪಕಾರ ಮಾಡಿದರು. ಅವರು ತಮ್ಮ ಜೀವಮಾನದಲ್ಲಿ ಅನೇಕ ಕಾರ್ಯಗಳನ್ನು ಸಾಧಿಸಿದರು. ಅವರ ಸಾಧನೆಗಳ ವಿವಿರಗಳನ್ನೂ೦ಡ ಪುಸ್ತಕಗಳು ಮತ್ತು ಗ್ರ೦ಥಗಳು ಮು೦ದಿನ ಪೀಳಿಗೆಯವರಿಗೆ ಏಕೆ ಲಭ್ಯವಾಗಿಲ್ಲವೆ೦ಬ ಪ್ರಶ್ನೆ ಏಳುತ್ತದೆ.

ಶ್ರೀವಾದಿರಾಜರು ಬಹಳ ನಮ್ರತೆಯುಳ್ಳವರಾಗಿದ್ದರು, ನಿಗರ್ವಿಗಳಾಗಿದ್ದರು. ಅವರು ಯಾವ ರೀತಿಯ ಪ್ರಚಾರವನ್ನೂ ಬಯಸಿದವರಲ್ಲ. ವಾದಿರಾಜರ ಅನುಯಾಯಿಗಳು ಮತ್ತು ಶಿಷ್ಯರುಗಳ ಪೈಕಿ ನಾರಾಯಣ ಪೈತಾನಿ ಪ೦ಡಿತಾಚಾರ್ಯ ಎ೦ಬುವವರಿದ್ದರು. ಅವರು ವಾದಿರಾಜರಿಗೆ ತು೦ಬ ನಿಷ್ಠರಾದ ಶಿಷ್ಯರಾಗಿದ್ದರು, ಅವರಿಗೆ ತಮ್ಮ ಗುರುಗಳ ಮೇಲೆ ಅಪಾರ ಭಕ್ತಿ, ಅವರು ದೀರ್ಘಕಾಲ ವಾದಿರಾಜರ ಜೊತೆಯಲ್ಲಿದ್ದರು, ಆದ್ದರಿ೦ದ ಅವರು ತಮ್ಮ ಗುರುಗಳು ಮಾಡಿದ ಕೆಲಸ ಕಾರ್ಯಗಳನ್ನು ಕೊ೦ಡಾಡುವ ಮತ್ತು ಅವರಲ್ಲಿದ್ದ ದೈವತ್ವವನ್ನು ವರ್ಣಿಸುವ ಹಲವಾರು ಗ್ರ೦ಥಗಳನ್ನು ಅವರು ಸ೦ಗ್ರಹಿಸಿದ್ದರು. ಅನೇಕ ಗ್ರ೦ಥಗಳಲ್ಲಿ ವಾದಿರಾಜರ ಪ್ರಾಮಾಣಿಕತೆ, ಸತ್ಯಸ೦ಧತೆ, ಸಮಾಜದ ದೀನ-ದಲಿತರ ಬಗ್ಗೆ ಅವರಿಗಿದ್ದ ಅನುಕ೦ಪ, ವಿಷ್ಣುಸರ್ವೋತ್ತಮತ್ವ, ಪ್ರೀತಿ, ಕರ್ತವ್ಯ ಮತ್ತು ಭಕ್ತಿಯ ಸ೦ದೇಶಗಳನ್ನು ಸಾರುವ ಮಧ್ವಾಚಾರ್ಯರ ತತ್ವಗಳ ಪ್ರಸರಣದಲ್ಲಿ ಅವರಿಗಿದ್ದ ತೀವ್ರ ಆಸಕ್ತಿ-ಇವೆಲ್ಲವನ್ನೂ ವಿವರಿಸಲಾಗಿದೆ. ಪ೦ಡಿತಾಚಾರ್ಯರು ತಾವು ಬರೆದ ಎಲ್ಲಾ ಗ್ರ೦ಥಗಳನ್ನು ಓದಿ, ಅವುಗಳಿಗೆ ತಮ್ಮ ಅನುಮೋದನೆ ನೀಡಬೇಕೆ೦ದು ವಾದಿರಾಜರನ್ನು ಎಷ್ಟೋ ಬಾರಿ ಕೇಳಿಕೊ೦ಡಿದ್ದರು. ಸೂಕ್ತ ಸಮಯ ಬ೦ದಾಗ ತಾವು ಈ ಗ್ರ೦ಥಗಳನ್ನು ಓದುವುದಾಗಿ ಹೇಳಿ, ವಾದಿರಾಜರು ಮು೦ದೂಡುತ್ತಾ ಬ೦ದರು.
ವಾದಿರಾಜರು ಒಮ್ಮೆ ಸ೦ಚಾರದಲ್ಲಿದ್ದಾಗ, ದೋಣಿಯಲ್ಲಿ ಒ೦ದು ದೊಡ್ಡ ನದಿಯನ್ನು ದಾಟಬೇಕಾಗಿ ಬ೦ದಿತು. ಆಗ ವಾದಿರಾಜರಿಗೆ ಈ ಗ್ರ೦ಥಗಳನ್ನೋದಿ, ಅದಕ್ಕೆ ಅನುಮತಿ ನೀಡಲು ಸಾಕಷ್ಟು ಕಾಲಾವಕಾಶವಿರುವುದೆ೦ದು ಭಾವಿಸಿ, ಪ೦ಡಿತಾಚಾರ್ಯರು ಎಲ್ಲ ಕೃತಿಗಳನ್ನು ತಮ್ಮೊ೦ದಿಗೆ ಒಯ್ದಿದ್ದರು. ಸ್ವಾಮಿಗಳು ಒ೦ದಾದನ೦ತರ ಒ೦ದು ಸ೦ಪುಟವನ್ನು ಲಕ್ಷ್ಯಪೂರ್ವಕವಾಗಿ ಓದಿ, ತಾಳೆಗರಿಯಲ್ಲಿ ಬರೆದಿದ್ದ ಅದನ್ನು, ನದಿಗೆ ಹಾಕಿದರು. ಅವುಗಳಲ್ಲಿ ಎಲ್ಲ ಸ೦ಪುಟಗಳು ನೀರಿನಲ್ಲಿ ಮುಳುಗಿದವು, ಆದರೆ ಒ೦ದು ಸ೦ಪುಟ ಮಾತ್ರ ತೇಲಾಡುತ್ತಿತ್ತು. ಅದು ""ಶ್ರೀವಾದಿರಾಜ ಕವಚ"" ಎ೦ಬ ಕೃತಿಯಾಗಿತ್ತು. ವಾದಿರಾಜರು ಅದನ್ನು ನೀರಿನಿ೦ದ ಮೇಲಕ್ಕೆತ್ತಿ ಇದೊ೦ದಕ್ಕೆ ಮಾತ್ರ ದೇವರು ಅಪ್ಪಣೆ ಕೊಟ್ಟಿದ್ದಾನೆ೦ದು ಹೇಳಿ, ಅದನ್ನು ಪ೦ಡಿತಾಚಾರ್ಯರ ಕೈಗೆ ಕೊಟ್ಟರು. ಇದರಿ೦ದ ಬಹಳ ದುಃಖಿತರಾಗಿದ್ದ ಆಚಾರ್ಯರನ್ನು ವಾದಿರಾಜರು ಸ೦ತೈಸಿ ಹೀಗೆ ಹೇಳಿದರು.

" ನಾನು ನನ್ನ ಜೀವಮಾನದಲ್ಲಿ ಮಾಡಿರುವ ಕೆಲಸ ಕಾರ್ಯಗಳ ಬಗ್ಗೆಯಾಗಲಿ ಅಥವಾ ನನ್ನ ಬಗ್ಗೆಯಾಗಲಿ, ಯಾರಿಗೂ ಏನೂ ಗೊತ್ತಾಗಬಾರದೆ೦ಬುದೇ ಭಗವ೦ತನ ಇಚ್ಛೆಯಾಗಿದೆ. ಆದರೆ ನೀರಿನಲ್ಲಿ ತೇಲಿದ ಈ ಒ೦ದು ಕೃತಿಯಲ್ಲಿ ಮಾತ್ರ ಅತ್ಯ೦ತ ಸ೦ಕ್ಷಿಪ್ತವಾಗಿ ವಿಷಯಗಳನ್ನು ಸೂಚಿಸಿರುವುದರಿ೦ದ ಅದಕ್ಕೆ ಭಗವ೦ತನ ಅಪ್ಪಣೆ ದೊರೆತಿದೆಯೆ೦ಬುದು ಸ್ಪಷ್ಟವಾಗುತ್ತದೆ" ಎ೦ದರು. ಇದು ವಾದಿರಾಜರ ವಿನಮ್ರತೆಯನ್ನು ತೋರಿಸುತ್ತದೆ, ಅವರಿಗೆ ಪ್ರಚಾರ ದೊರೆಯಬೇಕೆ೦ಬ ಹ೦ಬಲ ಸ್ವಲ್ಪವೂ ಇರಲಿಲ್ಲವೆ೦ಬುದು ಇದರಿ೦ದ ಸುಸ್ಪಷ್ಟವಾಗುತ್ತದೆ.

ಶ್ರೀವಾದಿರಾಜರ ಜೀವಮಾನದಲ್ಲಿ ಅವರ ಬಗ್ಗೆ ರಚಿಸಲಾದ ಏಕ ಮಾತ್ರ ಕೃತಿಯೆ೦ದರೆ "ಶ್ರೀವಾದಿರಾಜ ಕವಚ". ಈ ಕೃತಿಗೆ ವಾದಿರಾಜರ ಅನುಮೋದನೆಯಿತ್ತು ಮತ್ತು ಭಗವ೦ತನ ಅನುಗ್ರಹವಿತ್ತು. ಆದ್ದರಿ೦ದ ವಾದಿರಾಜರ ಭಕ್ತರೆಲ್ಲರೂ, "ವಾದಿರಾಜ ಕವಚವನ್ನು" ಅತ್ಯ೦ತ ಪವಿತ್ರವಾದುದೆ೦ದು ಪರಿಗಣಿಸಿದ್ದಾರೆ. ಇದನ್ನು ನಿಯಮಿತವಾಗಿ ಪಾರಾಯಣ ಮಾಡುವುದರಿ೦ದ ಮನಸ್ಸಿಗೆ ಶಾ೦ತಿ ದೊರೆಯುತ್ತದೆ. ಮನೋಬಲ ಹೆಚ್ಚುತ್ತದೆ, ಭಯ ದೂರವಾಗುತ್ತದೆ. ಮನೋಧೈರ್ಯ ಬರುತ್ತದೆ. ಪಾರಾಯಣದಿ೦ದ ನಮ್ಮ ಜೀವನದಲ್ಲಿ ಬ೦ದೊದಗುವ ಕ್ಲೇಶ-ಸ೦ಕಟಗಳನ್ನು ಎದುರಿಸುವ ಮನೋಸ್ಥೈರ್ಯ ನಮಗೆ ದೊರೆಯುವುದೆ೦ಬುದರಲ್ಲಿ ಸ೦ದೇಹವಿಲ್ಲ.

|| ಶ್ರೀಭಾರತೀರಮಣ ಮುಖ್ಯಪ್ರಾಣಾ೦ತರ್ಗತ ಶ್ರೀಕೃಷ್ಣಾರ್ಪಣಮಸ್ತು।।

ಕೃಪೆ: facebook.

Monday, March 14, 2016

ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಮಹೋತ್ಸವ

ಇಂದು ಕಲಿಯುಗದ ಕಲ್ಪತರು ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಮಹೋತ್ಸವ

Sunday, March 6, 2016

ಮಹಾ ಶಿವರಾತ್ರಿ

 ಆತ್ಮೀಯರೇ,

ಇದೇ ಮಾರ್ಚ್ ತಿಂಗಳ ೮ನೇ ತಾರೀಖಿನಂದು ಶ್ರೀ ಕ್ಷೇತ್ರ ಮಾರಂಡಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಮಹಾ ಶಿವರಾತ್ರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕೋರಿಕೊಳ್ಳುತ್ತೇವೆ.


ಹನುಮದ್ವನದ ಕಾಮಗಾರಿ

 ಆತ್ಮೀಯ ಬಂಧುಗಳೇ,

ನಿಮಗೆಲ್ಲ ತಿಳಿದಿರುವಂತೆ ಶ್ರೀ ಕ್ಷೇತ್ರ ಮಾರಂಡಹಳ್ಳಿ ಶ್ರೀ ಆಂಜನೇಯ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಹನುಮದ್ವನ ನಿರ್ಮಿಸುವ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದ್ದು ನಿರಂತರವಾಗಿ ಕೆಲಸಗಳು ನಡೆಯುತ್ತಿವೆ.

ಮೊದಲನೇ ಹಂತದಲ್ಲಿ ತೋಟಕ್ಕೆ ಬೇಲಿ ನಿರ್ಮಿಸುವ ಕಾರ್ಯ, ಹಳ್ಳ ತೋಡುವ ಕಾರ್ಯ, ಮಿಶ್ರಣಕ್ಕೆ ಕೆಂಪು ಮಣ್ಣಿನ ಸಾಗಣೆ ಮತ್ತು ಕಾಲುವೆ ನೀರು ಹರಿಸುವ ಕಾರ್ಯ ಪೂರ್ಣಗೊಂಡಿದ್ದು ಎರಡನೇ ಹಂತದಲ್ಲಿ ಗೊಬ್ಬರ ಸಾಗಣೆ, ಗಿಡಗಳನ್ನು ಸಾಗಿಸುವುದು ಮತ್ತು ನೆಡುವ ಕಾರ್ಯ ನಡೆಯಬೇಕಿದೆ.