Thursday, October 31, 2013

ಸಾರಿ ಬಂದನೆ | ಪ್ರಾಣೇಶ ಬಂದನೆ

ರಾಗ : ಕಾಪಿ
ತಾಳ : ಆಟತಾಳ
ಪುರಂದರದಾಸರ ಕೃತಿ

ಸಾರಿ ಬಂದನೆ | ಪ್ರಾಣೇಶ ಬಂದನೆ || ||

ಸಾರಿ ಬಂದು ಲಂಕಾಪುರವ ಮೀರಿದ ರಾವಣನ |
ಕಂಡು ಧೀರ ವಯ್ಯಾರದಿಂದ || ಅ ಪ ||

ವಾಯುಪುತ್ರನೆ ಶ್ರೀರಾಮದೂತನೆ
ಪ್ರೀತಿಯಿಂದ ಸೀತಾಂಗನೆಗೆ ಮುದ್ರಿಕೆಯ ತಂದಿತ್ತವನೆ || ||

ಭೀಮಸೇನನೆ ಕುಂತೀ ತನಯನೆ
ವಿರಾಟನ ಮನೆಯಲಿ ನಿಂತು ಕೀಚಕನ ಸಂಹರಿಸಿದವನೆ || ||

ಮಧ್ವರಾಯನೆ ಸರ್ವಜ್ಞ ಶ್ರೇಷ್ಠನೆ
ಅದ್ವೈತವ ಗೆದ್ದು ಪುರಂದರವಿಠಲನ ಮುಂದೆ ನಿಂತನೆ || ||

ಪ್ರಾಣನಾಥನ ನೋಡುವ ಬನ್ನಿ

ರಾಗ : ಮಧ್ಯಮತಿ
ತಾಳ : ಆಟತಾಳ

ಪ್ರಾಣನಾಥನ ನೋಡುವ ಬನ್ನಿ| ಹರಿ ದಾಸರೆಲ್ಲ ||

ಬೇಡಿದ ಮುಕ್ತಿಯ ನೀಡುವ ನಾಡೋಳು|
ನೋಡುವ ಜನರ ಕಾಡುವ ನಮ್ಮ ದೊರೆ || ||

ಇಂದಿರೆ ಅರಸನ ಚರಣ ದ್ವಂದ್ವವ ಹೊಂದಿ
ಮಂದರಧರ ಮಧುಸೂದನ ಭಕ್ತನ || ||

ಹರಿಹರ ಕರಿವರದ ಪರಾತ್ಪರಾ
ಪುರುಷನ ಭಕ್ತನ ಪರಿಪಾಲನಮ್ಮ || ||

ಶ್ರೀದ ಹನುಮ ಭೀಮ ಮಧ್ವಾಂತರ್ಗತ
ರಾಮಕೃಷ್ಣ ವೇದವ್ಯಾಸಾರ್ಪಿತವೆಂದು || ||

ಸೃಷ್ಟಿಯೊಳಗೆ ಬಂದು ಮುಕ್ತ ಪುರಾನಿಂದು
ದುಷ್ಟ ದೈತ್ಯರ ಕೊಂದು ವೆಂಕಟವಿಠಲನ ದಾಸನೆಂದು || ||

Monday, October 28, 2013

ಜಯ ವಾಯು ಹನುಮಂತ ಜಯ ಭೀಮ ಬಲವಂತ

ರಾಗ : ನಾಟಿ
ತಾಳ : ಝಂಪೆ ತಾಳ
ವ್ಯಾಸರಾಜರ ಕೃತಿ

ಜಯ ವಾಯು ಹನುಮಂತ ಜಯ ಭೀಮ ಬಲವಂತ | |

ಜಯ ಪೂರ್ಣ ಮತಿವಂತ ಜಯ ಸಲಹೊ ಸಂತ | ಅ ಪ |

ಅಂಜನೆಯಲಿ ಜನಿಸಿ ಅಂದು ರಾಮನ ಸೇವೆ
ನಂದದಲಿ ಮಾಡಿ ಕಪಿ ಬಲವ ಕೂಡಿ
ಸಿಂಧು ಲಂಘಿಸಿ ವನ ಭಂಗಿಸಿ
ಸೀತೆಗುಂಗುರ ಕೊಟ್ಟೆ ಲಂಕಾಪುರವ ಸುಟ್ಟೆ | |

ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ
ಶರಧಿಯನು ಕಟ್ಟಿ ಅರಿಬಲವ ಕುಟ್ಟಿ
ಉರಗ ಬಂಧನದಿಂದ ಕಪಿವರರು ಮೈಮರೆಯೆ
ಗಿರಿಯ ಸಂಜೀವನವ ತಂದು ಬದುಕಿಸಿದೆ | |

ದ್ವಾಪರಾಂತ್ಯದಿ ಪಾಂಡು ಭೂಪನಾತ್ಮಜನೆನಿಸಿ
ಶ್ರೀಪಾರ್ಥಸಾರಥಿಯ ಭಜಕ ನೀನಾದೆ
ಪಾಪಿ ಮಾಗಧ ಬಕ ಕೀಚಕ ಹಿಡಿಂಬಕರ
ಕೋಪದಿಂದಲಿ ತರಿದೆ ಮೂಜಗದಿ ಮೆರೆದೆ | |

ಧುರದಲಿ ದುರ್ಯೋಧನನ ಬಲವನ್ನು ತರಿದೆ
ಅರಿತು ದುಶ್ಯಾಸನನ ಒಡಲನ್ನು ಬಗೆದೆ
ಉರವ ತಪ್ಪಿಸಿ ಕೌರವನ್ನ ತೊಡೆಗಳ ಮುರಿದೆ
ಹರಿಯ ಕಿಂಕರ ಧುರಂಧರಗಾರು ಸರಿಯೆ | |

ಕಲಿಯುಗದಲಿ ಕಳ್ಳರುದಿಸಿ ದುರ್ಮತಗಳನು
ಬಲಿಸಿ ಶ್ರೀಹರಿಯ ಗುಣಗಳನು ಮರೆಸಿ
ಕಲಿಯನನುಸರಿಸಲು ಗುರುವಾಗಿ ಅವತರಿಸಿ
ಖಳರ ದುರ್ಮತ ಮುರಿದೆ ಶ್ರೀಕೃಷ್ಣ ಪರನೆಂದೆ | |