Sunday, February 17, 2013

ರಥವನೇರಿದ ರಾಘವೇಂದ್ರ

ರಥವನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರಾ ರಥವನೇರಿದ

ಸತತ ಮಾರ್ಗದಿ ಸಂತತ ಸೇವಿಪರಿಗೆ

ಅತಿ ಹಿತದಲಿ ಮನೋರಥವ ನೀಡುವೆನೆಂದು//



ಚತುರ ದಿಕ್ಕು ದಿಕ್ಕುಗಳಲ್ಲಿ ಅರಿಪ ಜನರಲ್ಲಿ

ಮಿತಿಯಿಲ್ಲದೆ ಬಂದು ಓಲೈಸುತಲಿ ವರಗಳ ಬೇಡುತಲಿ

ನುತಿಸುತ ಪರಿಪರಿ ನತರಾಗಿಹರಿಗೆ

ಗತಿಪೇಳದೆ ಸರ್ವಥಾ ಬಿಡೆನೆಂದು//



ಅತುಲಮಹಿಮಾ ನೀಯಾ ದಿನದಲಿ ದಿತಿಜ ವಂಶದಲಿ

ಉತಪತ್ತಿಯಾಗಿ ಉಚಿತದಲಿ ಉತ್ತಮಮತಿಯಲ್ಲಿ

ಅತಿಶಯವಿರದೆ ಪಿತನಬಾಧೆಗೆ

ಮನ್ಮಥಪಿತನೊಲಿಸಿದೆ ಜಿತಕರಣದಲಿ//



ಪ್ರಥಮ ಪ್ರಹ್ಲಾದ ವ್ಯಾಸ ಮುನಿಯೇ ಯತಿ ರಾಘವೇಂದ್ರ

ಪ್ರತಿವಾದಿ ಕದಳಿವನ ಕರಿಯೇ ಕರಮುಗಿವೆನು ದೊರೆಯೇ

ಕ್ಷಿತಿಯೊಳು ಗೋಪಾಲ ವಿಠಲನ ಸ್ಮರಿಸುತ

ಪ್ರತಿ ಮಂತ್ರಾಲಯದೊಳು ಅತಿ ಮೆರೆವೆ//

No comments:

Post a Comment