Monday, March 18, 2013

ರಾಘವೇಂದ್ರ ವಿಜಯ - ನವಮ ಸಂಧಿ


ನವಮ ಸಂಧಿ


ರಾಘವೇಂದ್ರರ ವಿಜಯ ಪೇಳುವೆ

ರಾಘವೇಂದ್ರರ ಕರುಣ ಬಲದಲಿ

ರಾಘವೇಂದ್ರರ ಭಕುತರಾದವರಿದನು ಕೇಳುವುದು//


ಜಯತು ಜಯ ಗುರುರಾಜ ಶುಭತಮ

ಜಯತು ಕವಿಜನಗೇಯ ಸುಂದರ

ಜಯತು ನಿಜಜನಪಾಲಕ ಜಯತು ಕರುಣಾಳೊ

ಜಯತು ಸಜ್ಜನ ವಿಜಯದಾಯಕ

ಜಯತು ಕುಜನಾರಣ್ಯ ಪಾವಕ

ಜಯತು ಜಯ ಜಯ ದ್ವಿಜವರಾರ್ಚಿತ ಪಾದಪಂಕಜ//೧//


ಹಿಂದೆ ನೀ ಪ್ರಹ್ಲಾದನೆನಿಸಿ

ತಂದೆಸಂಗಡ ವಾದ ಮಾಡೀ

ಇಂದಿರೇಶನ ತಂದು ಕಂಬದಿ ಅಂದು ತೋರಿಸಿದೆ

ಮುಂದೆ ನಿನ್ನಯ ಪಿತಗೆ ಸದ್ಗತಿ

ಛಂದದಿಂದಲಿ ಕೊಡಿಸಿ ಮೆರೆದೆಯೊ

ಎಂದು ನಿನ್ನಯ ಮಹಿಮೆ ಪೊಗಳಲು ಎನಗೆ ವಶವಲ್ಲ//೨//


ತೊಳಪುನಾಶಿಕ ಕದಪುಗಳು ಬಲು

ಪೊಳೆವ ಕಂಗಳು ನೀಳ ಪೂರ್ಭುಗಳೆಸೆವ

ತಾಪೆರೆನೊಸಲು ಥಳಥಳ ನಾಮವಕ್ಷತಿಯು

ಲಲಿತ ಅರುಣಾಧರದಿ ಮಿನುಗುವ

ಸುಲಿದ ದಂತಸುಪಂಕ್ತಿ ಸೂಸುವ

ಎಳೆನಗೆಯ ಮೊಗದಲ್ಲಿ ಶೋಭಿಪ ಚುಬುಕ ತಾನೊಪ್ಪ//೩//


ಕಂಬುಕಂಠವು ಸಿಂಹಸ್ಕಂದವು

ಕುಂಭಿಕರಸಮ ಬಾಹುಯುಗ್ಮವು

ಅಂಬುಜೋಪಮ ಹಸ್ತಯುಗಳವು ನೀಳಬೆರಳುಗಳು

ಅಂಬುಜಾಂಬಕ ಸದನಹೃದಯದಿ

ಅಂಬುಜಾಕ್ಷೀ ತುಳಸಿ ಮಾಲಾ

ಲಂಬಿತಾಮಲ ಕುಕ್ಷಿವಳಿತ್ರಯ ಗುಂಭಸುಳಿನಾಭೀ//೪//


ತೊಳಪುನಾಮ ಸಮುದ್ರಿಕಾವಳಿ

ಪೊಳೆವೋ ಪೆಣೆಯೊಳಗೂರ್ಧ್ವಪುಂಡ್ರವು

ತಿಲಕದೋಪರಿ ಮಿನುಗೊದಕ್ಷತಿ ರತ್ನ ಮಣಿಯೊಪ್ಪೆ

ಲಲಿತ ಮೇಖಲ ಕೈಪ ಕಟಿತಟ

ಚಲುವ ಊರೂಯುಗಳ ಜಾನೂ

ಜಲಜ ಜಂಘೆಯು ಗುಲ್ಫ ಪದಯುಗ ಬೆರಳು ನಖವಜ್ರ//೫//


ಅರುಣ ಶಾಠಿಯು ಶಿರದಲಿಂದಲಿ

ಚರಣ ಪರಿಯಂತರದಲೊಪ್ಪಿರೆ

ಚರಣಪಾದುಕಯುಗಳ ಪುರದಲಿ ನಿರುತ ಶೋಭಿಪದು

ಕರುಣಪೂರ್ಣ ಕಟಾಕ್ಷದಿಂದಲಿ

ಶರಣಜನರನ ಪೊರೆವೊ ಕಾರಣ

ಕರೆದರಾಕ್ಷಣ ಬರುವನೆಂಬೊ ಬಿರುದು ಪೊತ್ತಿಹನು//೬//


ರಾಯನಮ್ಮೀಜಗಕೆ ಯತಿಕುಲ

ರಾಯನಂ ಕಲ್ಯಾಣಗುಣಗಣ

ಕಾಯನಂ ನಿಸ್ಸೀಮ ಸುಖತತಿದಾಯನೆನಿಸಿರ್ಪ

ರಾಯ ವಾರಿಧಿ ವೃದ್ಧ ಗುಣಗಣ

ರಾಯ ನಿರ್ಮಲಕೀರ್ತಿಜೋತ್ಸ್ನನು

ರಾಯರಾಯನು ಎನಿಸಿ ಶೋಭಿಪನೆಂದು ಕಾಂಬುವೆನು//೭//


ಗಂಗಿಗಾದುದು ಯಮುನೆಸಂಗದಿ

ತುಂಗತರ ಪಾಲ್ಗಡಲಿಗಾದುದು

ರಂಗನಂಗದಿ ನೈಲ್ಯತೋರ್ಪುದು ಸರ್ವಕಾಲದಲಿ

ಸಿಂಗರಾದ ಸುವಾಣಿದೇವಿಗೆ

ಉಂಗರೋರುಸು ಗುರುಳು ಸರ್ವದ

ಮಂಗಳಾಂಗಿಯು ಗೌರಿ ಹರನಿಂ ಕಪ್ಪು ಎನಿಸಿಹಳೋ//೮//


ಮದವು ಏರೋದು ದೇವಗಜಕೆ

ರದನದಲಿ ನಂಜುಂಟು ಫಣಿಗೆ

ಮದವು ಮಹವಿಷ ಕಪ್ಪು ದೋಷವು ಎನಗೆ ಇಲ್ಲೆಂಬ

ಮುದದಿ ಲೋಕತ್ರಯದಿ ತಾನೇ

ಒದಗಿ ದಿನದಿನ ಪೇಳ್ವ ತೆರದಲಿ

ಸದಮಲಾತ್ಮಕರಾದ ರಾಯರ ಕೀರ್ತಿ ಶೋಭಿಪುದು//೯//


ಸರ್ವಸಂಪದ ನೀಡಲೋಸುಗ

ಸರ್ವಧರ್ಮವ ಮಾಡೊಗೋಸುಗ

ಸರ್ವವಿಘ್ನವ ಕಳಿಯೊಗೋಸುಗ ಕಾರ್ಯನೇರ್ವಿಕೆಗೆ

ಸರ್ವಜನರಿಗೆ ಕಾಮಿತಾರ್ಥವ

ಸರ್ವರೀತಿಲಿ ಸಲಿಸೊಗೋಸುಗ

ಊರ್ವಿತಳದೊಳು ತಾನೆ ಬೆಳಗೋದು ಅಮಲ ಗುರುಕೀರ್ತಿ//೧೦//


ಇಂದುಮಂಡಲರೋಚಿಯೋ

ಪಾಲ್ಸಿಂಧುರಾಜನ ವೀಚಿಯೋ ಸುರರಿಂದ್ರ

ನೊಜ್ರ ಮರೀಚಿಯೋ ಸುರತುರಗ ಸದ್ರುಚಿಯೋ

ಕಂದುಗೊರಳನ ಗಿರಿಯೋ ರಾಘವೇಂದ್ರ

ಗುರುಗಳ ಕೀರ್ತಿಪೇಳ್ವಡೆ

ಮಂದಬುದ್ಧಿಗೆ ತೋರದಂದದಿ ಕೀರ್ತಿ ರಾಜಿಪದು//೧೧//


ನಿಟಿಲ ನೇತ್ರನ ತೆರದಿ ಸಿತ

ಸುರತಟಿನಿಯಂದದಿ ಗೌರಗಾತರ

ಸ್ಫಟಿಕಮಣಿಮಯ ಪೀಠದಂದದಿ ಧವಳ ರಾಜಿಪದು

ಮಠದೊಳುತ್ತಮ ಮಧ್ಯಮಂಟಪ

ಸ್ಫುಟಿತಹಾಟಕರತ್ನ ಮುಕುರದ

ಕಟಕಮಯವರ ಪೀಠದಲಿ ಗುರುರಾಯ ಶೋಭಿಸಿದೆ//೧೨//


ಹರಿಯ ತೆರದಲಿ ಲಕ್ಷ್ಮೀನಿಲಯನು

ಹರಣ ತೆರದಲಿ ಜಿತಮನೋಜನು

ಸರಸಿಜೋದರ ತೆರದಿ ಸರ್ವದ ಸೃಷ್ಟಿಕಾರನು

ಮರುತನಂತಾಮೋದಕಾರಿಯು

ಸುರಪನಂತೆ ಸುಧಾಕರನು ತಾ

ಸುರರ ತರುವರದಂತೆ ಕಾಮದ ನೆನಿಪ ಗುರುರಾಯ//೧೩//


ಚಿತ್ತಗತ ಅಭಿಲಾಷದಂದದಿ

ಮತ್ತೆ ಮತ್ತೆ ನವೀನ ತಾ ಘನ

ಉತ್ತಮೋತ್ತಮ ಲಕುಮಿಯಂದದಿ ವಿಭವಕಾಸ್ಪದನೂ

ಮತ್ತೆ ಚಂದ್ರನ ತೆರದಿ ಗುರುವರ

ನಿತ್ಯದಲಿ ಸುಕಳಾದಿನಾಥನು

ಮೃತ್ಯುಯಿಲ್ಲದ ಸ್ವರ್ಗ ತೆರದಲಿ ಸುರಭಿ ಸಂಭ್ರುತನು//೧೪//


ಗಗನದಂದದಿ ಕುಜ ಸುಶೋಭಿತ

ನಿಗಮದಂದದಿ ನಿಶ್ಚಿತಾರ್ಥನು

ರಘುಕುಲೇಶನ ತೆರದಿ ಸರ್ವದ ಸತ್ಯಭಾಷಣನು

ನಗವರೋತ್ತಮನಂತೆ ನಿಶ್ಚಲ

ಗಗನ ನದಿತೆರ ಪಾಪಮೋಚಕ

ಮುಗಿಲಿನಂದದಿ ಚಿತ್ರಚರ್ಯನು ಎನಿಸಿ ತಾ ಮೆರೆವ//೧೫//


ಸರಸಿಜೋದ್ಭವನಂತೆ ಸರ್ವದ

ಸರಸವಿಬುಧರ ಸ್ತೋಮವಂದಿತ

ಸುರವರೇಂದ್ರನ ತೆರದಿ ಸಾಸಿರನಯನಕಾಶ್ರಯನು

ತರುಗಳಾರಿಯ ತೆರದಿ ಸಂತತ

ಸುರಗಣಾನನನೆನಿಪ ಕಾಲನ

ತೆರದಿ ಸಂತತ ಕುಜನರಿಗೆ ತಾಪವನೆ ಕೊಡುತಿಪ್ಪ//೧೬//


ನಿರುತ ನಿರ್ಋತಿಯಂತೆ ಮದ್ಗುರುವರ

ಸದಾ ನವವಿಭವನೆನಿಪನು

ವರುಣನಂದದಿ ಸಿಂಧುರಾಜಿತನಮಿಪ ಬಲಿಯುತನೂ

ಮರುತನಂತೆ ಸ್ವಸತ್ತ್ವಧಾರಿತ

ಪರಮ ಶ್ರೀ ಭೂ ರಮಣಸೇವಕ

ಹರಣ ಮಿತ್ರನ ತೆರದಿ ಮಹಧನಕೋಶ ಸಂಯುತನೂ//೧೭//


ಈಶನಂತೆ ವಿಭೂತಿಧಾರಕ

ಭೇಶನಂತೆ ಕಳಾಸುಪೂರಣ

ಕೀಶನಂತೆ ಜಿತಾಕ್ಷ ನಿರ್ಜಿತಕಾಮ ಸುಪ್ರೇಮಾ

ವ್ಯಾಸನಂತೆ ಪ್ರವೀಣಶಾಸ್ತ್ರ

ದಿನೇಶನಂದದಿ ವಿಗತದೋಷ

ನರೇಶನಂದದಿ ಕಪ್ಪಕಾಣಿಕೆ ನಿರುತ ಕೊಳುತಿಪ್ಪಾ//೧೮//


ವನದತೆರ ಸುರಲೋಕ ತೆರದಲಿ

ಅನವರತ ಸುಮನೋಭಿವಾಸನು

ಇವನ ತೆರದಲಿ ಇಂದು ತೆರದಲಿ ಕಮಲಕಾಶ್ರಯನು

ವನಜನೇತ್ರನ ತೆರದಿ ನಭತೆರ

ಮಿನುಗೊ ಸದ್ವಿಜರಾಜರಂಜಿತ

ಕನಕ ಕವಿತೆಯ ತೆರದಲಂಬುಧಿ ತೆರದಿ ತಾ ಸರಸ//೧೯//


ಇನತೆ ಗುಣಗಳು ನಿನ್ನೊಳಿಪ್ಪವೊ

ಘನಮಹಿಮ ನೀನೊಬ್ಬ ಲೋಕಕೆ

ಕನಸಿಲಾದರು ಕಾಣೆ ಕಾವರ ನಿನ್ನ ಹೊರತಿನ್ನು

ಮನವಚನ ಕಾರ್ಯಗಳ ಪೂರ್ವಕ

ತನುವು ಮನಿ ಮೊದಲಾದುದೆಲ್ಲನು

ನಿನಗೆ ನೀಡಿದೆ ಇದಕೆ ಎನಗನುಮಾನವಿನಿತಿಲ್ಲ//೨೦//


ಹರಿಯು ಭಕುತರ ಪೊರೆದ ತೆರದಲಿ

ಗುರುವೇ ನಿನ್ನಯ ಭಕುತ ಜನರನು

ಧರೆಯ ತಳದಲಿ ಪೊರೆಯೊಗೋಸುಗ ನಿನ್ನವತಾರ

ಕೊರತೆ ಇದಕೇನಿಲ್ಲ ನಿಶ್ಚಯ

ಪರಮಕರುಣಿಯು ನೀನೆ ಎನ್ನನು

ಶಿರದಿ ಕರಗಳನಿಟ್ಟು ಪಾಲಿಸೊ ಭಕುತಪರಿಪಾಲಾ//೨೧//


ಎನ್ನ ಪಾಲಕ ನೀನೆ ಸರ್ವದ

ನಿನ್ನ ಬಾಲಕ ನಾನೇ ಗುರುವರ

ಎನ್ನ ನಿನ್ನೊಳು ನ್ಯಾಯವ್ಯಾತಕೆ ಘನ್ನಗುಣನಿಧಿಯೇ

ಬನ್ನ ಬಡಿಸುವ ಭವದಿ ತೊಳಲುವದನ್ನು

ನೋಡೀ ನೋಡದಂದದಿ

ಇನ್ನು ಕಾಯದಲಿರುವರೇನಾಪನ್ನಪರಿಪಾಲಾ//೨೨//


ನಂಬಿಭಜಿಸುವ ಜನಕೆ ಗುರುವರ

ಇಂಬುಗೊಟ್ಟವರನ್ನು ಕಾಯುವಿ

ಎಂಬೋ ವಾಕ್ಯವು ಎಲ್ಲಿ ಪೋಯಿತೋ ತೋರೋ ನೀನದನು

ಬಿಂಬಮೂರುತಿ ನೀನೆ ವಿಶ್ವ

ಕುಟುಂಬಿ ಎನ್ನನು ಸಲಹೊ ಸಂತತ

ಅಂಬುಜೋಪಮ ನಿನ್ನ ಪದಯುಗ ನಮಿಪೆನನವರತ//೨೩//


ಮಾತೆ ತನ್ನಯ ಬಾಲನಾಡಿದ

ಮಾತಿನಿಂದಲಿ ತಾನು ಸಂತತ

ಪ್ರೀತಳಾಗುವ ತೆರದಿ ಎನ್ನಯ ನುಡಿದ ನುಡಿಯಿಂದ

ತಾತ ನೀನೆ ಎನಗೆ ಸರ್ವದ

ಪ್ರೀತನಾಗುವುದಯ್ಯ ಕಾಮಿತದಾತ

ಗುರುಜಗನ್ನಾಥವಿಠಲ ಲೋಲ ಪರಿಪಾಲ//೨೪//


//ಇತಿ ಶ್ರೀ ರಾಘವೇಂದ್ರ ವಿಜಯ ನವಮ ಸಂಧಿ ಸಮಾಪ್ತಂ//

No comments:

Post a Comment