Thursday, January 30, 2014

ನರನಾದ ಮೇಲೆ ಹರಿನಾಮ ಜಿಹ್ವೆಯೊಳಿರಬೇಕು

ನರನಾದ ಮೇಲೆ ಹರಿನಾಮ ಜಿಹ್ವೆಯೊಳಿರಬೇಕು
ಭೂತ ದಯಾಪರನಾಗಿರಬೇಕು
ಪಾತಕವೆಲ್ಲ ಕಳೆಯಲು ಬೇಕು
ಮಾತುಮಾತಿಗೆ ಹರಿಯೆನ್ನಬೇಕು ।।೧।।

ಆರು ವರ್ಗವ ನಳಿಯಬೇಕು
ಮೂರು ಗಣಂಗಳು ಮೀರಲು ಬೇಕು
ಸೇರಿ ಬ್ರಹ್ಮನೊಳಿರಬೇಕು
ಅಷ್ಟ ಮದಂಗಳ ತಿಳಿಯಲು ಬೇಕು ।।೨।।

ದುಷ್ಟರ ಸಂಗವ ಬಿಡಲುಬೇಕು
ಕೃಷ್ಣ ಕೇಶವ ಎನ್ನಬೇಕು
ವೇದ ಶಾಸ್ತ್ರವನೋದಲು ಬೇಕು
ಭೇದಹಂಕಾರವ ನೀಗಲು ಬೇಕು ।।೩।।

ಮಾಧವ ಸ್ಮರಣೆಯೊಳಿರಬೇಕು
ಶಾಂತಿ ಕ್ಷಮೆ ದಯೆ ಪಿಡಿಯಲು ಬೇಕು
ಭ್ರಾಂತಿ ಕ್ರೋಧನ ಕಳೆಯಲು ಬೇಕು
ಸಂತರ ಸಂಗದಿ ರತಿಯಿರಬೇಕು ।।೪।।

ಗುರುವಿನ ಚರಣಕ್ಕೆರಗಲು ಬೇಕು
ತರುಂಓಪಾಯನವನರಿಯಲು ಬೇಕು
ವಿರಕ್ತಿ ಮಾರ್ಗದಲಿರಬೇಕು
ಬಂದದ್ದುಂಡು ಸುಖಿಸಲು ಬೇಕು ।।೫।।

No comments:

Post a Comment