Tuesday, September 30, 2014

ತಿರುಮಲ ತಿರುಪತಿ ಬ್ರಹ್ಮೋತ್ಸವ (ಮೋಹಿನಿ ಅವತಾರ ಮತ್ತು ಗರುಡ ವಾಹನ ಸೇವ)

ಬ್ರಹ್ಮೋತ್ಸವದ ಐದನೇ ದಿನ ಬಹಳ ಮುಖ್ಯವಾದ ದಿನ. ಈ ದಿನ ಬೆಳಿಗ್ಗೆ ಬ್ರಹ್ಮಾಂಡ ನಾಯಕನು ಮೋಹಿನಿ ಅವತಾರದಲ್ಲಿ ಭಕ್ತರನ್ನು ಅನುಗ್ರಹಿಸುತ್ತಾನೆ. ಈ ದಿನ ಭಗವಂತನು ವಿಭಿನ್ನವಾದ ಭಂಗಿಯಲ್ಲಿ ತನ್ನ ವರದ ಹಸ್ತವನ್ನು ಅಭಯ ಹಸ್ತವನ್ನಾಗಿಸಿ ಬಂಗಾರದ ಆಭರಣಗಳನ್ನು ಧರಿಸಿ, ವಜ್ರದ ಕಿರೀಟವನ್ನು ಧರಿಸಿ ಶ್ರೀ ಕೃಷ್ಣನ ಜೊತೆಯಲ್ಲಿ ದಂತದ ಪಲ್ಲಕ್ಕಿಯಲ್ಲಿ ಮೆರವಣಿಗೆ ಹೊರಡುತ್ತಾನೆ.

ಸಂಜೆ ಭಗವಂತನಿಗೆ ವಿಶೇಷವಾದ ಗರುಡ ವಾಹನ ಸೇವೆ ಸಲ್ಲುತ್ತದೆ. ಈ ಸಮಯದಲ್ಲಿ ಭಗವಂತನು ಅಪರೂಪವಾದ ಲಕ್ಷ್ಮೀ ಹಾರ, ಮಕರ ಕಾಂತಿ ಮತ್ತು ಸಹಸ್ರ ನಾಮ ಹಾರವನ್ನು ಧರಿಸಿ ಬಂಗಾರದ ಗರುಡ ವಾಹನದ ಮೇಲೆ ವಿರಾಜಮಾನನಾಗಿ ಭಕ್ತರನ್ನು ಅನುಗ್ರಹಿಸುತ್ತಾನೆ 


No comments:

Post a Comment