Saturday, September 27, 2014

ತಿರುಮಲ ತಿರುಪತಿ ಬ್ರಹ್ಮೋತ್ಸವ (ಸಿಂಹ ವಾಹನ ಮತ್ತು ಮುತ್ಯಾಲ ಪಂದಿರಿ (ಮುತ್ತಿನ ಪಲ್ಲಕಿ) ವಾಹನ)



ಮೂರನೆಯ ದಿನ ಬೆಳಿಗ್ಗೆ ಬ್ರಹ್ಮಾಂಡ ನಾಯಕನಾದ ಶ್ರೀನಿವಾಸನು ವಜ್ರಕಿರೀಟಿ ಧಾರಿಯಾಗಿ ಸಿಂಹವಾಹನದಲ್ಲಿ ಮೆರವಣಿಗೆ ಹೊರಡುತ್ತಾನೆ. ಪ್ರತಿ ಮನುಷ್ಯನು ತನ್ನಲ್ಲಿನ ಮೃಗತ್ವವನ್ನು ಹೊರಹಾಕಬೇಕೆಂಬ ಉದ್ದೇಶದಿಂದ ಭಗವಂತನು ಸಿಂಹವಾಹನದಲ್ಲಿ ಮೆರವಣಿಗೆ ಹೊರಡುತ್ತಾನೆ.

ಅದೇ ದಿನ ಸಾಯಂಕಾಲ ಭಗವಂತನು ಶ್ರೀದೇವಿ ಭೂದೇವಿ ಸಮೇತನಾಗಿ ಭೋಗಶ್ರೀನಿವಾಸನಾಗಿ ಮುತ್ಯಾಲ ಪಂದಿರಿ (ಮುತ್ತಿನ ಪಲ್ಲಕಿ) ವಾಹನದಲ್ಲಿ ಭಕ್ತರನ್ನು ಅನುಗ್ರಹಿಸುತ್ತಾನೆ


No comments:

Post a Comment