Monday, September 29, 2014

ತಿರುಮಲ ತಿರುಪತಿ ಬ್ರಹ್ಮೋತ್ಸವ (ಕಲ್ಪವೃಕ್ಷ ವಾಹನ ಮತ್ತು ಸರ್ವಭೂಪಾಲ ವಾಹನ)

ಬ್ರಹ್ಮೋತ್ಸವದ ನಾಲ್ಕನೇ ದಿನ ಬೆಳಿಗ್ಗೆ ಬ್ರಹ್ಮಾಂಡ ನಾಯಕನಾದ ಶ್ರೀನಿವಾಸನು ಕಲ್ಪವೃಕ್ಷ ವಾಹನದಲ್ಲಿ ಭಕ್ತರನ್ನು ಅನುಗ್ರಹಿಸುತ್ತಾನೆ. ಕಲ್ಪವೃಕ್ಷ ಹೇಗೆ ಭಕ್ತರಿಗೋ ಎಲ್ಲವನ್ನೂ ಕರುಣಿಸುತ್ತದೋ ಹಾಗೆ ಭಗವಂತನು ಭಕ್ತರಿಗೆ ಎಲ್ಲವನ್ನೂ ಅನುಗ್ರಹಿಸುತ್ತಾನೆ ಎಂಬುದರ ಸಂಕೇತ ಈ ಕಲ್ಪವೃಕ್ಷ ವಾಹನ.

ನಾಲ್ಕನೇ ದಿನ ಸಂಜೆ ಪರಮಾತ್ಮನು ಶ್ರೀದೇವಿ ಭೂದೇವಿ ಸಮೇತನಾಗಿ ಸ್ವರ್ಣ ಕಚಿತವಾದ ವಾಹನದಲ್ಲಿ ಸರ್ವಭೂಪಾಲನಾಗಿ ಮೆರವಣಿಗೆ ಹೊರಡುತ್ತಾನೆ. ಭೂಮಂಡಲಕ್ಕೆ ತಾನೇ ಅಧಿಪತಿ ಎಂದು ಸಾರುವುದರ ಸಂಕೇತ ಈ ಸರ್ವ ಭೂಪಾಲ ವಾಹನ. ಏಳು ಅಡಿ ಎತ್ತರದ ವಾಹನದಲ್ಲಿ ಭಗವಂತನು ವಿರಾಜಮಾನನಾಗಿ ಭಕ್ತರಿಗೆ ಅನುಗ್ರಹ ನೀಡುತ್ತಾನೆ


No comments:

Post a Comment