Sunday, September 15, 2013

ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೨೦


ದುಷ್ಟದೈತ್ಯರು ಬಹಳ ಸಿಟ್ಟಿನಿಂದ ಬಂದು
ಘಟ್ಟಬೆಟ್ಟಗಳಲ್ಲಿ ಶ್ರೇಷ್ಠಸುರನಿಗೆ ಹೊಡೆಯ
ಬೆಟ್ಟಕ್ಕೆ ಬಿಗಿದರೆ ಲೋಷದ ತೆರದಂತೆ
ಮುಷ್ಠಿಯಿಂದಲಿ ಭೀಮ ಪೆಟ್ಟು ಹೊಡೆಯಲಾಗಿ
ನಷ್ಟರಾಗಿ ಖಳರು ದಶದಿಶಿಗೆ ಓಡಿದರು
ಹೃಷ್ಟಮನದಲಿ ಸುರರು ಜಯದುಂದುಭಿಯ ಹೊಡೆಯೆ
ತುಷ್ಟರಾಗಿ ಅವರ ಇಷ್ಟವನು ಸಲಿಸಿ
ಶ್ರೇಷ್ಠ ಗುರು ತಂದೆ ಗೋಪಾಲವಿಠಲನ ಮನ
ಮುಟ್ಟಿ ಭಜಿಸುವ ಪ್ರಾಣನೆ ಸಲಹೊ॥

No comments:

Post a Comment