Thursday, September 12, 2013

ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೧೯


ಹರಿಯು ತುಷ್ಟನಾಗಿ ಪರಮೇಷ್ಠಿಗೆ ಪೇಳ್ದ
ಪರಮೇಷ್ಠಿ ಒಲಿದು ಸೂರ್ಯಂಗೆ ಪೇಳ್ದ
ಕರುಣಿಸಿ ಸೂರ್ಯ ಯಾಜ್ಞವಲ್ಕ್ಯರಿಗೆ ಪೇಳ್ದೆನೊ
ಅರಿವುದು ಉದ್ಗೀಥ ಬ್ರಾಹ್ಮಣ ಇದೇ
ಆರು ಈ ವಿದ್ಯೆವನು ಪೆಲಿ ಕೇಳ್ದವರಿಗೆ
ದಾರಿದ್ರ್ಯ ಭವರೋಗ ದುಃಖ ಕಳೆದೂ
ಬಾರಿಬಾರಿಗೆ ಬೇಡಿದಿಷ್ಟಾರ್ಥಗಳ ಕೊಟ್ಟು
ಧೀರ ಗುರು ತಂದೆ ಗೋಪಾಲವಿಠಲ ದೂತ
ಕಾರುಣ್ಯದಿಂದ ಸಲಹೊ ಪ್ರಾಣ ॥

No comments:

Post a Comment