Friday, March 7, 2014

ಕಲಿಯುಗದ ಮಹಿಮೆಯು ಕಾಣಬಂತೀಗ

ಕಲಿಯುಗದ ಮಹಿಮೆಯು ಕಾಣಬಂತೀಗ
ಆಲಜಾಕ್ಷ ಮೇಲ್ಗಿರಿಯ ಶ್ರೀ ವೆಂಕಟೇಶ ।।

ಹರಿಕಥೆಯನೆ ಬಿಟ್ಟು ಹೀನ ನುಡಿ ನುಡಿಯುವರು
ಗುರುಹಿರಿಯರ ದೂಷಿಸಲು ಎಣಿಸುವರು
ಪೊರೆದ ತಾಯ್ತಂದೆಗಳ ಮಾತುಗಳ ಮನ್ನಿಸದೆ
ತರುಣಿಯರ ನಿಡಿಗೇಳಲಿಚ್ಚಿಸುತ್ತಿಹರು ।।೧।।

ಪಟ್ಟದರಸಿಯ ಬಿಟ್ಟು ಪರಸತಿಯ ಬಯಸುವರು
ಕೊಟ್ಟ ಸಾಲವ ನುಂಗಿ ಕೊಳಲೆಣಿಪರು
ಮುಟ್ಟಿ ಭಾಷೆಯ ಕೊಟ್ಟು ಮೋಸವನೆ ಮಾಡುವರು
ಬಿಟ್ಟು ಪರದೈವವನು ಮಾರಿಗೆರಗುವರು ।।೨।।

ಕಂಡುದನು ಹೇಳರು ಕಾಣದನು ಪೇಳುವರು
ಉಂಡ ಮನೆಗೆರಡು ಬಗೆಯುತ್ತಲಿಹರು
ಕೊಂಡಾಡಿ ಬೇಡಿದರೆ ಕೊಡರೊಂದು ರುವ್ವಿಯನು
ದಂಡಿಸಿ ಕೇಳಿದರೆ ಧನವ ಕೊಡುತಿಹರು ।।೩।।

ಕಳ್ಳರೊಳು ಅತಿಸ್ನೇಹ ಸುಳ್ಳರೊಳು ಸೋಲುವರು
ಒಳ್ಳೆಯವರೊಡನೆ ವಂಚನೆ ಮಾಡುವರು
ಇಲ್ಲದ ಅನಾಥರಿಗೆ ಇಷ್ಟೊಂದವಿಕ್ಕರು
ಬಲ್ಲಿದರೆ ಬಾಯಿಸವಿಯನುಣಿಸುವರು ।।೩।।

ಮಾಡಿದುಪಕಾರವನು ಮರೆತುಕೊಂಬರು ಮತ್ತೆ
ಕೊಡಲೇ ಕಾದುವರು ಕಪಟತ್ವದಿಂದ
ರೂಢಿಯೊಳಗೆ ನಮ್ಮ ಪುರಂದರವಿಠಲನ್ನ
ಪಾಡಿಪೊಗಳುವರಿಗಿನ್ನಾರ ಭಯವಿಲ್ಲ ।।೪।।

No comments:

Post a Comment