Monday, April 1, 2013

ನಾರಾಯಣ ನಿನ್ನ ನಾಮದ ಸ್ಮರಣೆಯ

ನಾರಾಯಣ ನಿನ್ನ ನಾಮದ ಸ್ಮರಣೆಯ

ಸಾರಾಮೃತವೆನ್ನ ನಾಲಿಗೆಗೆ ಬರಲಿ//ಪ//


ಕೂಡುವಾಗಲಿ ನಿಂತಾಡುವಾಗಲಿ ಮತ್ತೆ ಹಾಡುವಾಗಲಿ ಹರಿದಾಡುವಾಗಲಿ

ಕೋಟಿ ವಿನೋದದಿ ನೋಡದೆ ನಾ ಮಾಡಿದ ಪಾಪ ಬಿಟ್ಟೋಡಿ ಹೋಗೊ ಹಾಗೆ


ಊರಿಗೆ ಹೋಗಲಿ ಊರೊಳಗಿರಲಿ ಹಗೆಬಂದಗಲಿ ಕಾದಿರಲಿ

ವಾರಿಜನಾಭ ನರಸಾರಥಿ ಸನ್ನುತ ಸಾರಿ ಸಾರಿಗೆ ನಾ ಬೀಸರದಾಗೆ


ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ ಎಷ್ಟಾದರೂ ಮತಿಕೆಟ್ಟು ಇರಲಿ

ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ ಅಷ್ಟಾಕ್ಷರ ಮಹಾ ಮಂತ್ರದ ನಾಮವ

ಸಂತತ ಹರಿ ನಿನ್ನ ಸಾಸಿರ ನಾಮವು ಅಂತರಂಗದ ಒಳಗಿರಿಸಿ

ಎಂತೋ ಪುರಂದರ ವಿಠ್ಠಲ ರಾಯನ ಅಂತ್ಯ ಕಾಲದಲ್ಲಿ ಚಿಂತಿಸೋ ಹಾಗೆ



No comments:

Post a Comment