Sunday, May 29, 2011

ವಾರ್ಷಿಕೋತ್ಸವ ಸಮಾರಂಭ ಮೇ ೧೬,೧೭,೧೮

೨೦೧೧ ಮೇ ೧೬ ರಿಂದ ೧೮ ನೆ ತಾರೀಕಿನವರೆಗೆ ಮಾರಂಡಹಳ್ಳಿಯಲ್ಲಿರುವ ಶ್ರೀ ಅಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ವಾರ್ಷಿಕೋತ್ಸವದ ಸಣ್ಣ ವರದಿ. ಮೇ ಹದಿನಾರರಂದು ಬೆಳಿಗ್ಗೆ ಹೋಮ ಹವನಾದಿಗಳಿಂದ ವಾರ್ಷಿಕೋತ್ಸವಕ್ಕೆ ಚಾಲನೆ ದೊರೆಯಿತು. ನಂತರ ಮುಖ್ಯಪ್ರಾಣ ದೇವರಿಗೆ ಭಕ್ತಾದಿಗಳಿಂದ ನವನೀತ ಅಲಂಕಾರ, ಪೂಜೆ ಮಂಗಳಾರತಿ ನಡೆಯಿತು. ಸಂಜೆ ೮ ಗಂಟೆಗೆ ಲೋಕ ಕಲ್ಯಾಣಾರ್ಥವಾಗಿ ಸೀತಾರಾಮ ಕಲ್ಯಾಣೋತ್ಸವ ವಿಜ್ರಂಭಣೆಯಿಂದ ನೆರವೇರಿತು. ಮರುದಿನ ಬೆಳಿಗ್ಗೆ ಹೋಮ ಹವನಾದಿಗಳು, ಮುಖ್ಯಪ್ರಾಣ ದೇವರಿಗೆ ಪಂಚಾಮೃತ ಅಭಿಷೇಕ, ರಜತ ಕವಚ ಅಲಂಕಾರ, ಮಂಗಳಾರತಿ ನಂತರ ಉತ್ಸವ ಮೂರ್ತಿಗಳನ್ನು ಪ್ರದಕ್ಷಿಣೆಯ ಮೂಲಕ ಕರೆತಂದು ರಥದಲ್ಲಿ ಅಲಂಕರಿಸಿ ರಥ ಬೀದಿಯಲ್ಲಿ ಮೆರವಣಿಗೆ ಹೊರಟು ಭಕ್ತಾದಿಗಳು ಯಥಾಶಕ್ತಿ ಪೂಜೆಗಳನ್ನು ಸಲ್ಲಿಸಿ ಯಶಸ್ವಿಯಾಗಿ ನಡೆಸಿಕೊಟ್ಟರು. ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ, ಸಂಜೆ ಯಥಾಪ್ರಕಾರ ದೇವರಿಗೆ ಹಾರತಿ. ಮರುದಿನ ದೇವರಿಗೆ ಅಲಂಕಾರಮಯವಾದ ತೊಟ್ಟಿಲಲ್ಲಿ ಶಯನೋತ್ಸವದೊಂದಿಗೆ ಮೂರು ದಿನಗಳ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ತೆರೆ ಬಿದ್ದಿತು.



























No comments:

Post a Comment