Tuesday, October 19, 2010

ವಿಜಯದಶಮಿ ಪ್ರಯುಕ್ತ ಮುಖ್ಯಪ್ರಾಣ ದೇವರಿಗೆ ಬೆಣ್ಣೆ ಅಲಂಕಾರ

ಪ್ರತಿ ವರ್ಷದಂತೆ ಈ ವರ್ಷವೂ ಅಕ್ಟೋಬರ್ ೧೭ ರಂದು ಮಾರಂಡಹಳ್ಳಿಯಲ್ಲಿ ವಿಜಯದಶಮಿಯು ಸಂಭ್ರಮದಿಂದ
ಆಚರಿಸಲಾಯಿತು. ಬೆಳಿಗ್ಗೆ ಶ್ರೀ ಮುಖ್ಯಪ್ರಾಣ ದೇವರಿಗೆ ಅಭಿಷೇಕ ನಂತರ ಬೆಣ್ಣೆ ಅಲಂಕಾರ ಮಾಡಲಾಯಿತು.
ಮಧ್ಯಾನ್ಹ ೧.೦೦ ಗಂಟೆ ಸುಮಾರಿಗೆ ತೀರ್ಥ ಪ್ರಸಾದ ನೆರವೇರಿತು. ನಾಲ್ಕು ಗಂಟೆ ಸುಮಾರಿಗೆ ಶ್ರೀ ಸೀತ ರಾಮ
ಲಕ್ಷ್ಮಣ, ಅಂಜನೇಯ ಸಮೇತ ಉತ್ಸವ ಮೂರ್ತಿಗಳನ್ನು ರಥ ಬೀದಿಯಲ್ಲಿ ಮೆರವಣಿಗೆ ಮೂಲಕ ಬನ್ನಿ ಮಂಟಪಕ್ಕೆ
ತೆರಳಿ ಪೂಜೆ ಸಲ್ಲಿಸಿ ನಂತರ ಊರ ಮೆರವಣಿಗೆ ನಡೆಸಲಾಯಿತು..















No comments:

Post a Comment