Tuesday, December 4, 2012

ತುಂಗಾತೀರದಿ ನಿಂತ ಸುಯತಿವರನ್ಯಾರೆ ಪೇಳಮ್ಮ

ತುಂಗಾತೀರದಿ ನಿಂತ ಸುಯತಿವರನ್ಯಾರೆ ಪೇಳಮ್ಮ


ಸಂಗೀತಪ್ರಿಯ ಮಂಗಳ ಸುಗಣತರಂಗ ಮುನಿಕುಲೋತ್ತುಂಗ ಕಣಮ್ಮ//



ಚೆಲುವ ಸುಮುಖ ಫಣೆಯಲ್ಲಿ ತಿಲಕ ನಾಮಗಳು ನೋಡಮ್ಮ

ಜಲಜಮಣಿಯ ಕೊರಳಲ್ಲಿ ತುಳಸಿಮಾಲೆಗಳು ಪೇಳಮ್ಮ

ಸುಲಲಿತ ಕಮಂಡಲು ದಂಡವನೆ ಧರಿಸಿಹನೆ ನೋಡಮ್ಮ

ಕ್ಷುಲ್ಲ ಹಿರಣ್ಯಕನಲ್ಲಿ ಜನಿಸಿದ ಪ್ರಹ್ಲಾದನು ತಾನಿಲ್ಲಿಹನಮ್ಮ//



ಸುಂದರ ಚರಣಾರವಿಂದಕೆ ಭಕುತಿಯಲಿಂದ ನೋಡಮ್ಮ

ವಂದಿಸಿ ಸ್ತುತಿಸುವ ಭೂಸುರವೃಂದ ನೋಡಮ್ಮ

ಚಂದದಲ೦ಕೃತಿಯಿಂದ ಶೋಭಿಸುವಾನಂದ ನೋಡಮ್ಮ

ಹಿಂದೆ ವ್ಯಾಸಮುನಿಯೆಂದೆನಿಸಿದ ಕರ್ಮಂದಿಗಳರಸಘದಿಂದ ರಹಿತನೆ//



ಅಭಿನವ ಜನಾರ್ಧನ ವಿಠಲನ ಧ್ಯಾನಿಸುವ ನೋಡಮ್ಮ

ಅಭಿವಂದಿಸಿದವರಿಗೆ ಅಖಿಲಾರ್ಥವ ಸಲ್ಲಿಸುವ ನೋಡಮ್ಮ

ನಭಮಣಿಯಂದದಿ ವಿವಿಧದಿ ಶೋಭಿಸುವ ನೋಡಮ್ಮ

ಶುಭಗುಣಗಣನಿಧಿ ರಾಘವೇಂದ್ರ ಗುರು ಅಬುಜಭವಾಂಡದಿ ಪ್ರಬಲಕಾಣಮ್ಮ//

Monday, December 3, 2012

ಉಡುಪಿಯ ಶ್ರೀ ಕೃಷ್ಣನ ಅಲಂಕಾರಗಳು-2






Source : sodevadirajamutt.in

ತುಂಗಾತೀರ ವಿರಾಜಂ ಭಜಮನ

ತುಂಗಾತೀರ ವಿರಾಜಂ ಭಜಮನ


ರಾಘವೇಂದ್ರ ಗುರು ರಾಜಂ ಭಜಮನ//



ಮಂಗಳಕರ ಮಂತ್ರಾಲಯವಾಸಂ

ಶೃಂಗಾರನನ ರಜಿತಹಾಸಂ

ರಾಘವೇಂದ್ರ ಗುರು ರಾಜಂ ಭಜಮನ//



ಕರದೃತ ದಂಡ ಕಮಂಡಲುಮಲಂ

ಸುರುಚಿರ ಚೇಲಂ ಧೃತ ಮಣಿ ಮಾಲಂ

ರಾಘವೇಂದ್ರ ಗುರು ರಾಜಂ ಭಜಮನ//



ನಿರುಪಮ ಸುಂದರ ಕಾಯ ಸುಶೀಲಂ

ವರಕಮಲೇಶ ಪಿತ ನಿಜ ಸಕಲಂ

ರಾಘವೇಂದ್ರ ಗುರು ರಾಜಂ ಭಜಮನ//

Tuesday, November 27, 2012

ವಂದಿಪೆ ನಿನಗೆ ಗಣನಾಥ

ವಂದಿಪೆ ನಿನಗೆ ಗಣನಾಥ


ಮೊದಲ್ವೊಂದಿಪೆ ನಿನಗೆ ಗಣನಾಥ//



ಬಂದ ವಿಘ್ನ ಕಳಿಯೋ ಗಣನಾಥ

ಮೊದಲ್ವೊಂದಿಪೆ ನಿನಗೆ ಗಣನಾಥ//



ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೇ

ಸಂದ ರಣದಲ್ಲಿ ಗಣನಾಥ//



ಮಾಧವನ ಆಜ್ಞೆಯಿಂದ ಧರ್ಮರಾಯ ಪೂಜಿಸಲು

ಸಾಧಿಸಿದ ರಾಜ್ಯ ಗಣನಾಥ//



ಮಂಗಳಮೂರುತಿ ಗುರು ರಂಗ ವಿಠಲನ ಪಾದ

ಹಿಂಗದೆ ಪಾಲಿಸೋ ಗಣನಾಥ//

Thursday, November 22, 2012

ವೀರ ಹನುಮ ಬಹು ಪರಾಕ್ರಮಾ

ವೀರ ಹನುಮ ಬಹು ಪರಾಕ್ರಮಾ


ಸುಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ//



ರಾಮ ದೂತನೆನೆಸಿಕೊಂಡೆ ನೀ

ರಾಕ್ಷಸರ ವನವನೆಲ್ಲ ಕಿತ್ತು ಬಂದೆ ನೀ

ಜಾನಕಿಗೆ ಮುದ್ರೆ ಇತ್ತು ಜಗತಿಗೆಲ್ಲ ಹರುಷವಿತ್ತು

ಚೂಡಾಮಣಿಯ ರಾಮಗಿತ್ತು ಲೋಕಕೆ ಮುತ್ತೆನಿಸಿಬರುವ//



ಗೋಪಿಸುತನ ಪಾದಪೂಜಿಸಿ

ಗದೆಯ ಧರಿಸಿ ಬಕಾಸುರನ ಸಂಹರಿಸಿದೆ

ದ್ರೌಪದಿಯ ಮೊರೆಯ ಕೇಳಿ ಮತ್ತೆ ಕೀಚಕನ್ನ ಕೊಂದು

ಭೀಮನೆಂಬ ನಾಮ ಧರಿಸಿ ಸಂಗ್ರಾಮ ಧೀರನಾಗಿ ಜಗದಿ//



ಮಧ್ಯಗೆಹನಲ್ಲಿ ಜನಿಸಿ ನೀ

ಬಾಲ್ಯದಲ್ಲಿ ಮತ್ಸರಿಯ ರೂಪಗೊಂಡೆ ನೀ

ಸತ್ಯವತಿಯ ಸುತನ ಭಜಿಸಿ ಸಮ್ಮುಖದಿ ಭಾಷ್ಯ ಮಾಡಿ

ಸಜ್ಜನರ ಪೊರೆವ ಮುದ್ದು ಪುರಂದರ ವಿಠಲನ ದಾಸ//