Monday, June 20, 2011

ಶ್ರೀ ವೆಂಕಟೇಶ ಸ್ತೋತ್ರ

ವೆಂಕಟೇಶೋ ವಾಸುದೇವಃ ಪ್ರದ್ಯುಮ್ನೋs ಮಿತವಿಕ್ರಮಃ
ಸಂಕರ್ಷಣೋನಿರುದ್ಧಶ್ಚ ಶೇಷಾದ್ರಿಪತಿರೇವಚ //

ಜನಾರ್ಧನಃ ಪದ್ಮನಾಭೋ ವೆಂಕಟಾಚಲವಾಸನಃ
ಸೃಷ್ಟಿಕರ್ತಾ ಜಗನ್ನಾಥೋ ಮಾಧವೋ ಭಕ್ತ ವಾತ್ಸಲ://

ಗೋವಿಂದೋ ಗೊಪತಿ: ಕೃಷ್ಣಃ ಕೇಶವೋ ಗರುಡಧ್ವಜಃ
ವರಾಹೋ ವಾಮನಶ್ಚೈವ ನಾರಾಯಣ ಅಧೋಕ್ಷಜ//

ಶ್ರೀಧರ: ಪುಂಡರೀಕಾಕ್ಷ: ಸರ್ವದೇವಸ್ತುತೋ ಹರಿ:
ಶ್ರೀನ್ರುಸಿಂಹೋ ಮಹಾಸಿಂಹ: ಸೂತ್ರಾಕಾರ: ಪುರಾತನ://

ರಮಾನಾಥೋ ಮಹೀಭರ್ತಾ ಭೂಧರಃ ಪುರುಷೋತ್ತಮಃ
ಚೋಲಪುತ್ರಪ್ರಿಯ: ಶಾಂತೋ ಬ್ರಹ್ಮಾದೀನಾಂ ವರಪ್ರದಃ//

ಶ್ರೀನಿಧಿ: ಸರ್ವಭೂತಾನಾಂ ಭಯಕ್ರುದ್ಭಯನಾಶನಃ
ಶ್ರೀರಾಮೋ ರಾಮಭದ್ರಶ್ಚ ಭವಬಂಧೈಕಮೋಚಕಃ //

ಭೂತಾವಾಸೋ ಗಿರಾವಾಸಃ ಶ್ರೀನಿವಾಸಃ ಶ್ರೀಯಃ ಪತಿ:
ಅಚ್ಯುತಾನಂತ ಗೋವಿಂದೋ ವಿಷ್ಣುವೆಂಕಟನಾಯಕಃ//

ಸರ್ವದೇವೈಕಶರಣಂ ಸರ್ವದೇವೈಕದೆವತಂ
ಸಮಸ್ತದೇವಕವಚಂ ಸರ್ವದೇವಶಿಖಾಮಣಿ://

ಇತೀದಂ ಕೀರ್ತಿತಂ ಯಸ್ಯ ವಿಷ್ಣೋರಮಿತತೇಜಸಃ
ತ್ರಿಕಾಲೇ ಯಃ ಪಠೇನ್ನಿತ್ಯಂ ಪಾಪಂ ತಸ್ಯ ನ ವಿದ್ಯತೇ//

ರಾಜದ್ವಾರೇ ಪಠೇದ್ಘೋರೆ ಸಂಗ್ರಾಮೇ ರಿಪು ಸಂಕಟೇ
ಭೂತಸರ್ಪಪಿಶಾಚಾದಿಭಯಂ ನಾಸ್ತಿ ಕದಾಚನ//

ಅಪುತ್ರೋ ಲಭತೇ ಪುತ್ರಾನ್ ನಿರ್ಧನೋ ಧನವಾತ್ ಭವೇತ್
ರೋಗಾರ್ತೋ ಮುಚ್ಯತೇ ರೋಗಾದ್ಭದ್ದ್ಹೋ ಮುಚ್ಯೇತ ಬಂಧನಾತ್//

ಯದ್ಯದಿಷ್ಟತಮಂ ಲೋಕೇ ತತ್ತತ್ಪ್ರಾಪ್ನ್ಯೋತಸಂಶಯಃ
ಐಶ್ವರ್ಯಂ ರಾಜಸನ್ಮಾನಂ ಭುಕ್ತಿ ಮುಕ್ತಿ ಫಲಪ್ರದಂ//

ವಿಷ್ಣೋಲೋಕೈಕಸೋಪಾನಂ ಸರ್ವದು:ಖೈಕನಾಶನಂ
ಸರ್ವೈಶ್ವರ್ಯಪ್ರದಂ ನೃಣಾಂ ಸರ್ವಮಂಗಲಕಾರಕಂ//

ಮಾಯಾವೀ ಪರಮಾನಂದಂ ತ್ಯಕ್ತ್ವಾ ವೈಕುಂಠಮುತ್ತಮಂ
ಸ್ವಾಮಿಪುಷ್ಕರಣೀತೀರೇ ರಮಯಾ ಸಹಮೋದತೆ//

ಕಲ್ಯಾಣಾದ್ಭುತಗಾತ್ರಾಯ ಕಾಮಿತಾರ್ಥಪ್ರದಾಯಿನೇ
ಶ್ರೀಮದ್ವೇ೦ಕಟನಾಥಾಯ ಶ್ರೀನಿವಾಸಾಯ ತೇ ನಮಃ//

ವೆಂಕಟಾದ್ರಿಸಮಂ ಸ್ಥಾನಂ ಬ್ರಹ್ಮಾಂಡೇ ನಾಸ್ತಿ ಕಿಂಚನ
ವೆಂಕಟೇಶಸಮೋದೇವೋ ನ ಭೂತೋ ನ ಭವಿಷ್ಯತಿ
ಎತೇನ ಸತ್ಯವಾಕ್ಯೇನ ಸರ್ವಾರ್ಥಾನ್ ಸಾಧಯಾಮ್ಯಹಂ//

// ಇತಿ ಶ್ರೀ ಬ್ರಹ್ಮಾಂಡಪುರಾಣೇ ಬ್ರಹ್ಮನಾರದಸಂವಾದೇ ಶ್ರೀ ವೆಂಕಟಸ್ತೋತ್ರಂ//

Monday, May 30, 2011

Varshikotsava Videos on Youtube

Copy the below url and paste it into your browser and watch the videos

http://www.youtube.com/watch?v=k2DwY9r7NLI&feature=related

http://www.youtube.com/watch?v=enuBZQWex1c

http://www.youtube.com/watch?v=oCHuo2f9FWs

http://www.youtube.com/watch?v=ibJa8nQ67Jk

http://www.youtube.com/watch?v=CmXblhWKk9s

http://www.youtube.com/watch?v=R9oaz53Sx7Q

http://www.youtube.com/watch?v=4RM_RdWJPL4

Varshikotsava

Sunday, May 29, 2011

ವಾರ್ಷಿಕೋತ್ಸವ ಸಮಾರಂಭ ಮೇ ೧೬,೧೭,೧೮

೨೦೧೧ ಮೇ ೧೬ ರಿಂದ ೧೮ ನೆ ತಾರೀಕಿನವರೆಗೆ ಮಾರಂಡಹಳ್ಳಿಯಲ್ಲಿರುವ ಶ್ರೀ ಅಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ವಾರ್ಷಿಕೋತ್ಸವದ ಸಣ್ಣ ವರದಿ. ಮೇ ಹದಿನಾರರಂದು ಬೆಳಿಗ್ಗೆ ಹೋಮ ಹವನಾದಿಗಳಿಂದ ವಾರ್ಷಿಕೋತ್ಸವಕ್ಕೆ ಚಾಲನೆ ದೊರೆಯಿತು. ನಂತರ ಮುಖ್ಯಪ್ರಾಣ ದೇವರಿಗೆ ಭಕ್ತಾದಿಗಳಿಂದ ನವನೀತ ಅಲಂಕಾರ, ಪೂಜೆ ಮಂಗಳಾರತಿ ನಡೆಯಿತು. ಸಂಜೆ ೮ ಗಂಟೆಗೆ ಲೋಕ ಕಲ್ಯಾಣಾರ್ಥವಾಗಿ ಸೀತಾರಾಮ ಕಲ್ಯಾಣೋತ್ಸವ ವಿಜ್ರಂಭಣೆಯಿಂದ ನೆರವೇರಿತು. ಮರುದಿನ ಬೆಳಿಗ್ಗೆ ಹೋಮ ಹವನಾದಿಗಳು, ಮುಖ್ಯಪ್ರಾಣ ದೇವರಿಗೆ ಪಂಚಾಮೃತ ಅಭಿಷೇಕ, ರಜತ ಕವಚ ಅಲಂಕಾರ, ಮಂಗಳಾರತಿ ನಂತರ ಉತ್ಸವ ಮೂರ್ತಿಗಳನ್ನು ಪ್ರದಕ್ಷಿಣೆಯ ಮೂಲಕ ಕರೆತಂದು ರಥದಲ್ಲಿ ಅಲಂಕರಿಸಿ ರಥ ಬೀದಿಯಲ್ಲಿ ಮೆರವಣಿಗೆ ಹೊರಟು ಭಕ್ತಾದಿಗಳು ಯಥಾಶಕ್ತಿ ಪೂಜೆಗಳನ್ನು ಸಲ್ಲಿಸಿ ಯಶಸ್ವಿಯಾಗಿ ನಡೆಸಿಕೊಟ್ಟರು. ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ, ಸಂಜೆ ಯಥಾಪ್ರಕಾರ ದೇವರಿಗೆ ಹಾರತಿ. ಮರುದಿನ ದೇವರಿಗೆ ಅಲಂಕಾರಮಯವಾದ ತೊಟ್ಟಿಲಲ್ಲಿ ಶಯನೋತ್ಸವದೊಂದಿಗೆ ಮೂರು ದಿನಗಳ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ತೆರೆ ಬಿದ್ದಿತು.