Tuesday, October 19, 2010

ವಿಜಯದಶಮಿ ಪ್ರಯುಕ್ತ ಮುಖ್ಯಪ್ರಾಣ ದೇವರಿಗೆ ಬೆಣ್ಣೆ ಅಲಂಕಾರ

ಪ್ರತಿ ವರ್ಷದಂತೆ ಈ ವರ್ಷವೂ ಅಕ್ಟೋಬರ್ ೧೭ ರಂದು ಮಾರಂಡಹಳ್ಳಿಯಲ್ಲಿ ವಿಜಯದಶಮಿಯು ಸಂಭ್ರಮದಿಂದ
ಆಚರಿಸಲಾಯಿತು. ಬೆಳಿಗ್ಗೆ ಶ್ರೀ ಮುಖ್ಯಪ್ರಾಣ ದೇವರಿಗೆ ಅಭಿಷೇಕ ನಂತರ ಬೆಣ್ಣೆ ಅಲಂಕಾರ ಮಾಡಲಾಯಿತು.
ಮಧ್ಯಾನ್ಹ ೧.೦೦ ಗಂಟೆ ಸುಮಾರಿಗೆ ತೀರ್ಥ ಪ್ರಸಾದ ನೆರವೇರಿತು. ನಾಲ್ಕು ಗಂಟೆ ಸುಮಾರಿಗೆ ಶ್ರೀ ಸೀತ ರಾಮ
ಲಕ್ಷ್ಮಣ, ಅಂಜನೇಯ ಸಮೇತ ಉತ್ಸವ ಮೂರ್ತಿಗಳನ್ನು ರಥ ಬೀದಿಯಲ್ಲಿ ಮೆರವಣಿಗೆ ಮೂಲಕ ಬನ್ನಿ ಮಂಟಪಕ್ಕೆ
ತೆರಳಿ ಪೂಜೆ ಸಲ್ಲಿಸಿ ನಂತರ ಊರ ಮೆರವಣಿಗೆ ನಡೆಸಲಾಯಿತು..















Tuesday, October 5, 2010

ಶ್ರೀ ಶ್ರೀ ವಿಜ್ಞಾನನಿಧಿ ತೀರ್ಥರು ಬೃಂದಾವನ ಪ್ರವೇಶ

ಶ್ರೀ ಶ್ರೀಪಾದರಾಜ ಮಠ ಸ್ವಾಮೀಜಿಗಳಾದ ಶ್ರೀ ವಿಜ್ಞಾನನಿಧಿ ತೀರ್ಥರು ಅಕ್ಟೋಬರ್ 05 ೨೦೧೦ ಮಂಗಳವಾರ ದ್ವಾದಶಿಯಂದು
ಮುಳಬಾಗಿಲಿನಲ್ಲಿ ಶ್ರೀಪಾದರಾಜರ ಸನ್ನಿಧಿಯಲ್ಲಿ ಅಪರಾಹ್ನ ೦೨.೧೫ ರ ಸುಮಾರಿಗೆ ಇಹಲೋಕವನ್ನು ತ್ಯಜಿಸಿದರು..ಸಂಜೆ
೦೬.೦೦ ಗಂಟೆ ಸುಮಾರಿಗೆ ಬೃಂದಾವನ ಪ್ರವೇಶವಾಯಿತು..

Wednesday, September 22, 2010